
26th April 2025
ತಾಳಿಕೋಟಿ: ಪಟ್ಟಣದ ಶ್ರೀ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆ ತಾಳಿಕೋಟಿ ತನ್ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ನಾಡಿನ ನೆಲ,ಜಲ, ಭಾಷೆ,ಸಾಹಿತ್ಯ,ಸಂಗೀತ, ನೃತ್ಯ, ಶಿಕ್ಷಣ,ಮಾದ್ಯಮ,ಚಿತ್ರಕಲೆ, ಸಮಾಜ ಸೇವೆ, ರಂಗಭೂಮಿ, ಕ್ರೀಡೆ,ವೈದ್ಯಕೀಯ ಸೇವೆ,ಜನಪದ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 2025 ನೇ ಸಾಲಿನ ಪ್ರಶಸ್ತಿಗೆ ಸ್ಥಳೀಯ ಎಸ್.ಕೆ.ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಕ ಡಾ.ಅನಿಲಕುಮಾರ ಇರಾಜ ಅವರು
ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಮೇ 3 ರಂದು ಶನಿವಾರ ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯ ಪ್ರಕಟಿಸಿದೆ.
ಡಾ. ಇರಾಜ ಅವರು ಕಳೆದ 32 ವರ್ಷಗಳಿಂದ ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಗಳಲ್ಲಿ ಹಿಂದಿ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ನಾಡಿನ ಹಲವಾರು ಕಡೆ ಮಕ್ಕಳಿಗೆ ಬೋಧಿಸಿದ್ದಾರೆ , ಲೇಖಕರಾಗಿ , ಭಾಷಣಕಾರರಾಗಿ, ನಿರೂಪಕರಾಗಿ ಗುರುತಿಸಲ್ಪಡುವ ಇವರು ಅಸಂಖ್ಯ ಶಿಷ್ಯಂದಿರ ಪ್ರೀತಿಯ ಗುರುಗಳಾಗಿದ್ದಾರೆ.
ಇವರಿಗೆ ಬಂದ ಪ್ರಶಸ್ತಿ ಗಾಗಿ ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ, ಕಾರ್ಯದರ್ಶಿ ಎಮ್.ಎಸ್.ಸರಶೆಟ್ಟಿ, ಸಹಕಾರ್ಯದರ್ಶಿ ಕೆ.ಎಸ್.ಮುರಾಳ, ಪ್ರೌಢಶಾಲಾ ಚೇರಮನ್ ರಾದ ಎಮ.ಎಮ್.ವಾಲಿ, ಆಯ್.ಬಿ.ಬಿಳೆಭಾವಿ ಪ್ರಾಚಾರ್ಯ ಡಾ.ಡಿ.ಬಿ.ಮೂಗಡ್ಲಿಮಠ, ಕೆ.ಕಿಶೋರಕುಮಾರ ,ಜೆ.ಎಸ್.ಕಟ್ಟಿಮನಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ